ಸೋದರಿ

ಸೋದರಿಯು ಇವಳೆನ್ನ
ಅದರಿಸಿ ಬರಿಸಿ, ಹರಸಿ,
ಸೋದರನ ತನು-ಮನವು ರೋಸಿಹೋಗುವ ಮುನ್ನ

ಬಾಳಿನಲೆಮ್ಮ ಬಿರುಗಾಳಿ ಬಂದಿತ್ತು
ಸೋಲು ಅಡಿಗಡಿಗೆ ಕಾಲಿರಿಸಿತ್ತು.
ಗೇಲು ಎಲ್ಲಿಯೊ ಕಾಲು ಕಿತ್ತಿತ್ತು.

ಅಂದು ಜೀವನದ ಮಾಮರದ ಅಡಿಯೇಳತಿತ್ತು.
ತಂದೆ ಸಾವಿಗೆ ಸಿಲುಕಿ – ಉಸಿರು ನಡುಗುತಿತ್ತು
ಮುಂದೆ ಶಯ್ಯೆಯ ತಂಗಿ, ಹೃದಯ ಮೊರೆಯಿಡುತಿತ್ತು

ಬಾಲಕಾಲದ ಬಾಲ ವಿಹಾರ
ಕಾಲ ಕಾಲಕೆ ತಿಂದುಂಡು ನಲಿವ ಹೂಹಾರ
ಹಾಲಿನಂದದಿ ಬರಿದೆ ಚೆಲ್ಲಿ ಹೋಗಿತ್ತು.

ತಾಯ ಕರುಳಿನ ಕರೆಯೆ ಕೇಳದಂತಿತ್ತು
ಮಾಯಗೊಂಡಿತ್ತು ಮಮತೆ,
ಬಾಯ ನಲ್ವಾತು ದೂರ ಓಡಿತ್ತು.

ಕಂಬನಿಯ ಚುಂಬನದ ಬದುಕು
ಮುಂಬನಿಯ ಅಭಿಷೇಕ ಅದಕು,
ಅಂಜಿಸುವ ಅಪವಾದ; ಹಿಂಜಿಸುವ ಅಳುಕು

ಹೃದಯ ಮರುಗಿತ್ತು ಕರಗಿತ್ತು ಎನ್ನ
ಅಧರ ನಡುಗಿತ್ತು. ಬಿರಿದಿತ್ತು ಸಿರಿವೆಣ್ಣ
ಸೋದರಿಯು ಮರೆಯದಿರಿ ಇವಳೆನ್ನ…..

ಒಂದಿಗೆಯೆ ಕೆಲ ಕಾಲ ಕಳೆದೆವು
ನಂಬಿಗೆಯ ಕಣ್ಗಳಲಿ ಮೆರೆದೆವು
ಇಂದಿಗದು ಮುಗಿದಿತು, ಮುಂದಿನದ ತಿಳಿಯೆವು!

ಹಾಳು ಈ ಜಗವು
ಹಾಳು ಇಲ್ಲಿಯ ರೀತಿ
ಗೋಳು ಹೊಯ್ಯವರು ತನ್ನವರು ಇಲ್ಲಿಲ್ಲ ಪ್ರೀತಿ

ನೋವ ಮಾಡದಿರಿ ಮನಕೆ
ಜೀವ ದಣಿಸದಿರಿ,
ಹೂವಿನಂದದಿ ಸಲಹಿ ವ್ಯಥೆಯನಳಿಸಿ

……ಹೋಗವ್ವ ನಲ್ದಾಯಿ
ಭಾಗ್ಯ ಲಕ್ಷ್ಮಿಯೆ, ಪತಿ ಮನೆಗೆ
ಯೋಗ್ಯರವರಿನ್ನು ತಾಯ್ತಂದೆ ನಿನಗೆ!

ಕಂಬನಿಯೆ ಸುರಿಯದಿರು
ಇಂದಿನಿತೆ ಸಾಕು, ಹರಿಯದಿರು,
ತಂಗಿ ಇವಳೆನ್ನ ಮರೆಯದಿರು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಜಯತು ವಿಶ್ವರೂಪಿಣಿ
Next post ಬರಿ ಲಂಚವಿರುವಲ್ಲಿ ಸಾವಯವ ಮಂಚವೇರೀತೇ?

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

cheap jordans|wholesale air max|wholesale jordans|wholesale jewelry|wholesale jerseys